ಸಾಯಿಕೃಷ್ಣ ಎಂಟರ್ಪ್ರೈಸಸ್ ಲಾಂಛನದಲ್ಲಿ, ಎಸ್. ಶ್ರೀಧರ್ ನಿರ್ಮಾಣದ ಈ ದಿಲ್ ಹೇಳಿದೆ ನೀ ಬೇಕೆಂತ ಚಿತ್ರಕ್ಕೆ ಸೋಲದೇವನಹಳ್ಳಿಯ ಖಾಸಗಿ ಬಂಗಲೆಯೊಂದರಲ್ಲಿ ಜುಗಾರಿ ಅವಿನಾಶ್, ಸುರೇಶ್ ಮಂಗಳೂರು, ವಿದ್ಯಾಮೂರ್ತಿ ಮುಂತಾದವರು ಅಭಿನಯಿಸಿದ ದೃಶ್ಯ ಚಿತ್ರೀಕರಣವಾಯಿತು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಕೆ.ಟಿ.ಎಂ, ಶ್ರೀನಿವಾಸ, ಛಾಯಾಗ್ರಹಣ -ಹೆಚ್.ಕೆ. ಚಿದಾನಂದ್, ಸಂಗೀತ-ಸತೀಶ್ ಆರ್ಯನ್, ಸಂಕಲನ-ಗಣೇಶನ್, ನೃತ್ಯ -ಮದನ್ ಹರಿಣಿ, ಸಾಹಸ-ಡಿಫರೆಂಟ್ ಡ್ಯಾನಿ, ನಿರ್ವಹಣೆ-ಪ್ರಸಾದ್, ರಮೇಶ್, ತಾರಾಗಣದಲ್ಲಿ ಜುಗಾರಿ ಅವಿನಾಶ್, ಶ್ರೀಶ್ರುತಿ, ಗೋಪಿ, ಸುರೇಶ್ ಮಂಗಳೂರು, ನಾಗೇಂದ್ರ ಷಾ, ವಿದ್ಯಾಮೂರ್ತಿ, ಕುಮುದ, ಮುಂತಾದವರಿದ್ದಾರೆ